ಜಿಲ್ಲಾ ಕೃಷಿ ಹವಾಮಾನ ಘಟಕಗಳು: ಡಿಎಎಮ್ಯು ಘಟಕಗಳು (ಕೃಷಿ ವಿಜ್ಞಾನ ಕೇಂದ್ರಹಾವೇರಿ ಮತ್ತು ಬಾಗಲಕೋಟೆ)
ಜಿಲ್ಲಾ ಕೃಷಿ-ಹವಾಮಾನ ಘಟಕ (ಡಿಎಎಮ್ಯು)ವು ಭಾರತೀಯ ಹವಾಮಾನ ಇಲಾಖೆ (ಐಎಮ್ಡಿ), ಭೂ ವಿಜ್ಞಾನ ಸಚಿವಾಲಯ, ಭಾರತ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾಗಿದ್ದು, ಗ್ರಾಮೀಣ ಕೃಷಿ ಮೌಸಂ ಸೇವಾ (ಜಿಕೆಎಮ್ಎಸ್) ಯೋಜನೆಯಡಿಯಲ್ಲಿದೆ. ಆಗ್ರೋಮೆಟ್ ಸಲಹಾ ಸೇವಾ ಲಘುಪ್ರಕಟಣೆಗಳನ್ನು ರೈತರಿಗೆ ಆಂಗ್ಲ ಮತ್ತು ಕನ್ನಡ ಭಾμÉಗಳಲ್ಲಿ ನಿಯಮಿತವಾಗಿ ತಯಾರಿಸಲಾಗುತ್ತದೆ ಮತ್ತು ಪ್ರಸಾರ ಮಾಡಲಾಗುತ್ತದೆ ಹಾಗೂ ನಿರ್ಧಾರ ಬೆಂಬಲ ವ್ಯವಸ್ಥೆ (ಡಿಎಸ್ಎಸ್) ಪೆÇೀರ್ಟಲ್ನಲ್ಲಿ ಅಪ್ಲೋಡ್ ಮಾಡಲಾಗುತ್ತದೆ.
ಜಿಲ್ಲಾ ಕೃಷಿ-ಹವಾಮಾನ ಘಟಕದ ಕಾರ್ಯಕ್ರಮದಡಿ, ಕೃಷಿ ವಿಜ್ಞಾನ ಕೇಂದ್ರ, ಹಾವೇರಿ ಮತ್ತು ಬಾಗಲಕೋಟೆ 502 ಹಳ್ಳಿಗಳನ್ನು ಒಳಗೊಂಡ 27 ವಾಟ್ಸಾಪ್ ಗುಂಪುಗಳನ್ನು ರಚಿಸಿ 8000 ರೈತರಿಗೆ ಪ್ರಯೋಜನವನ್ನು ನೀಡಿತು ಮತ್ತು 10 ಜನಪ್ರಿಯ ಲೇಖನಗಳು, 4 ಕರಪತ್ರಗಳು ಮತ್ತು ಮೇಘಸಂದೇಶ ಪತ್ರಗಳನ್ನು ಪ್ರಕಟಿಸಿತು ಮತ್ತು ಹವಾಮಾನ ಬದಲಾವಣೆ, ಮುಂಗಾರು ಬದಲಾವಣೆಗಳು, ಬೆಳೆಗಳ ಬೆಳವಣಿಗೆಯ ಮೇಲೆ ಅವುಗಳ ಪರಿಣಾಮಗಳ ಬಗ್ಗೆ ರೈತರಲ್ಲಿ ಜಾಗೃತಿ ಮೂಡಿಸಲು ಪ್ರಯತ್ನಿಸುತ್ತಿದೆ. ಮತ್ತು ಅವುಗಳ ತೀವ್ರತೆಗೆ ಮುಂಚೆಯೇ ಕೀಟ ಮತ್ತು ರೋಗವನ್ನು ನಿಯಂತ್ರಿಸಲು ಮುನ್ನೆಚ್ಚರಿಕೆಗಳು/ತಡೆಗಟ್ಟುವ ಕ್ರಮಗಳನ್ನು ಅಭಿವೃದ್ಧಿಪಡಿಸುವಲ್ಲಿ ಮತ್ತು ಅವುಗಳನ್ನು ತೆಗೆದುಕೊಳ್ಳುವಲ್ಲಿ ಸಹಾಯ ಮಾಡುವುದು.