ಡಾ.ಪಿ.ಎಲ್.ಪಾಟೀಲ

ಕುಲಪತಿಗಳು, ಕೃವಿವಿ, ಧಾರವಾಡ

ಕೃವಿವಿ ಧಾರವಾಡ ಕೃಷಿ ವಿಜ್ಞಾನ ವಿಶ್ವವಿದ್ಯಾಲಯ, ಎತ್ತಿನಗುಡ್ಡ ಆವರಣ, ಕೃಷಿನಗರ, ಧಾರವಾಡ – 580 005 (ಕರ್ನಾಟಕ)
ಫೋನ್ (ಕಛೇರಿ) (O) : +91- 836 – 2447783, 2214201 ಫ್ಯಾಕ್ಸ್ : +91- 836 – 2448349
ಮಿಂಚಂಚೆ: vc@uasd.in

ನಮ್ಮಕೃಷಿ ವಿಶ್ವವಿದ್ಯಾಲಯ, ಧಾರವಾಡ (ಕೃವಿವಿಧಾ) ಅಕ್ಟೋಬರ್ 1, 1986 ರಂದು ಧಾರವಾಡದ ಕೃಷಿ ಮಹಾವಿದ್ಯಾಲಯದ ಆವರಣದಲ್ಲಿ ಔಪಚಾರಿಕವಾಗಿ ಸ್ಥಾಪನೆಯಾದಾಗ ಉತ್ತರ ಕರ್ನಾಟಕದ ಜನರು, ರೈತರು ಮತ್ತು ವಿದ್ಯಾರ್ಥಿಗಳ ಕನಸು ನನಸಾಗಿದೆ.

ವಿಶ್ವವಿದ್ಯಾಲಯವು ಉತ್ತರ ಕರ್ನಾಟಕದ ಏಳು ಜಿಲ್ಲೆಗಳಾದ ಬಾಗಲಕೋಟೆ, ಬೆಳಗಾವಿ, ವಿಜಯಪುರ, ಧಾರವಾಡ, ಗದಗ, ಹಾವೇರಿ ಮತ್ತು ಉತ್ತರ ಕನ್ನಡದಲ್ಲಿ ಐದು ಮಹಾವಿದ್ಯಾಲಯಗಳು, ಆರು ಕೃಷಿ ಡಿಪ್ಲೊಮಾ ಅಧ್ಯಯನ ಕಾರ್ಯಕ್ರಮಗಳು, 30 ಸಂಶೋಧನಾ ಕೇಂದ್ರಗಳು, ಆರು ಕೃಷಿ ವಿಸ್ತರಣಾ ಶಿಕ್ಷಣ ಘಟಕಗಳು, ಐದು ಕೃಷಿ ವಿಜ್ಞಾನ ಕೇಂದ್ರಗಳು ಮತ್ತು ಒಂದು ಕೃಷಿ ತಂತ್ರಜ್ಞಾನ ಮಾಹಿತಿ ಕೇಂದ್ರಗಳ ವ್ಯಾಪ್ತಿ ಹೊಂದಿದೆ. ಮಣ್ಣಿನ ವಿಧಗಳು, ಹವಾಮಾನ, ಭೂಗೋಳದ ಬೆಳೆ ಮತ್ತು ಕೃಷಿ ಪರಿಸ್ಥಿತಿಗಳಲ್ಲಿ ಹೆಚ್ಚಿನ ವೈವಿಧ್ಯ ಅಸ್ತಿತ್ವದಲ್ಲಿದೆ. ಭೌಗೋಳಿಕ ಕ್ಷೇತ್ರವ್ಯಾಪ್ತಿಯು ಒಣ ಬೇಸಾಯದಿಂದ ಹಿಡಿದು ಭಾರೀ ಮಳೆ ಮತ್ತು ನೀರಾವರಿ ಪ್ರದೇಶವನ್ನು ಒಳಗೊಂಡಿದೆ. ವಿಶ್ವವಿದ್ಯಾನಿಲಯದ ವ್ಯಾಪ್ತಿಯಲ್ಲಿರುವ ಪ್ರದೇಶವು ರಾಜ್ಯದ ಭೌಗೋಳಿಕ ಪ್ರದೇಶದ ಶೇಕಡಾ 28, , ಒಟ್ಟು ಸಾಗುವಳಿ ಪ್ರದೇಶದ ಶೇಕಡಾ 27 ಮತ್ತು ನೀರಾವರಿ ಪ್ರದೇಶದ ಶೇಕಡಾ 14 ರಷ್ಟಿದೆ. ಹಲವಾರು ಕೃಷಿ, ತೋಟಗಾರಿಕೆ ಮತ್ತು ನೆಡುತೋಪಿನ ಬೆಳೆಗಳು, ಮಸಾಲೆಗಳು ಮತ್ತು ಸಾಂಬಾರು ಪದಾರ್ಥಗಳು, ಔಷಧೀಯ ಮತ್ತು ಸುಗಂಧ ಸಸ್ಯಗಳನ್ನು ಬೆಳೆಸಲಾಗುತ್ತಿದೆ. ಈ ಪ್ರದೇಶದ ಪ್ರಮುಖ ಬೆಳೆಗಳಲ್ಲಿ ಜೋಳ, ಹತ್ತಿ, ಭತ್ತ, ದ್ವಿದಳ ಧಾನ್ಯದ ಬೆಳೆಗಳು, ಮೆಣಸಿನಕಾಯಿ, ಕಬ್ಬು, ಶೇಂಗಾ ( ಕಡಲೆಕಾಯಿ), ಸೂರ್ಯಕಾಂತಿ, ಗೋಧಿ, ಕುಸುಬೆ ಮತ್ತು ತೋಟಗಾರಿಕಾ ಬೆಳೆಗಳು ಸೇರಿವೆ.
ವಿಶ್ವವಿದ್ಯಾಲಯವು ಕೃಷಿ ಮತ್ತು ಸಂಬಂಧಿತ ಅಧ್ಯಯನ ವಿಭಾಗಗಳಲ್ಲಿ ಬೋಧನೆ, ಸಂಶೋಧನೆ ಮತ್ತು ವಿಸ್ತರಣೆಯ ಸಮಗ್ರ ಕಾರ್ಯಗಳನ್ನು ನಿರ್ವಹಿಸುತ್ತದೆ. ವಿಶ್ವವಿದ್ಯಾನಿಲಯದಿಂದ ಜ್ಙಾನ ಪಡೆದು ಪ್ರತಿ ವರ್ಷ ಹೊರಬರುವ ಉತ್ತಮ ಗುಣಮಟ್ಟದ ಪದವೀಧರರ ಪ್ರತಿಭೆಗಳಿಂದ ಕೃಷಿಯಲ್ಲಿ ಗುಣಮಟ್ಟದ ಶಿಕ್ಷಣಕ್ಕೆ ವಿಶ್ವವಿದ್ಯಾಲಯವು ಹೆಸರುವಾಸಿಯಾಗಿದೆ. ವಿಶ್ವವಿದ್ಯಾಲಯದ ಹೆಮ್ಮೆಯ ಉತ್ಪನ್ನಗಳು ಮತ್ತು ಜ್ಯೋತಿ ಧಾರಕರಾದ ಹಳೆಯ ವಿದ್ಯಾರ್ಥಿಗಳು ವಿಶ್ವದಾದ್ಯಂತ ಹರಡಿದ್ದಾರೆ ಹಾಗೂ ಭಾರತ ಮತ್ತು ವಿದೇಶಗಳಲ್ಲಿನ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಅಪೇಕ್ಷಿಸಿದ ಸ್ಥಾನಗಳನ್ನು ಅಲಂಕರಿಸಿದ್ದಾರೆ ಮತ್ತು ಸಮರ್ಪಣಾ ಮನೋಭಾವದಿಂದ ಸೇವೆ ಸಲ್ಲಿಸುತ್ತಿದ್ದಾರೆ. ವಿಶ್ವವಿದ್ಯಾಲಯದ ಸಂಶೋಧನಾ ಕಾರ್ಯಕ್ರಮವು ಮುಖ್ಯವಾಗಿ ಕೃಷಿ ಸಮುದಾಯದ ಸಮಸ್ಯೆಗಳನ್ನು ಪರಿಹರಿಸಲು ನಿಸರ್ಗಕ್ಕೆ ಅನುಗುಣವಾಗಿದೆ. ಮೂಲಭೂತ ಸಮಸ್ಯೆಗಳನ್ನು ನಿಭಾಯಿಸಲು ಅನ್ವಯಿಕ ಸಂಶೋಧನೆಯನ್ನು ಬೆಂಬಲಿಸಲು ಮೂಲಭೂತ ಸಂಶೋಧನೆಗೂ ಒತ್ತು ನೀಡಲಾಗಿದೆ. ರೈತರ ಕ್ಷೇತ್ರದ ಸ್ಥಿತಿಗತಿ, ಮಾನ್ಯಗೊಳಿಸುವಿಕೆ ಮತ್ತು ಸ್ವೀಕಾರವನ್ನು ಖಚಿತಪಡಿಸಿಕೊಳ್ಳಲು ಹೊಸದಾಗಿ ಅಭಿವೃದ್ಧಿಪಡಿಸಿದ ತಂತ್ರಜ್ಞಾನವನ್ನು ವಿಕಸಿತಗೊಳಿಸಲು ಮತ್ತು ಪರಿಷ್ಕರಿಸಲು ಸರಿಹೊಂದುವ ಸಂಶೋಧನೆಯನ್ನು ಕೈಗೊಳ್ಳಲಾಗುತ್ತದೆ. ತನ್ನ ಚಟುವಟಿಕೆಗಳು ಮತ್ತು ತಂತ್ರಜ್ಞಾನದ ವರ್ಗಾವಣೆಯಲ್ಲಿನ ಸಾಧನೆಗಳಿಂದಾಗಿ ವಿಶ್ವವಿದ್ಯಾಲಯವು ಹೆಚ್ಚಿನ ಖ್ಯಾತಿಯನ್ನು ಗಳಿಸಿದೆ. ಸರ್ಕಾರಿ ಇಲಾಖೆಗಳು ಮತ್ತು ನಾಗರಿಕ ಸಮಾಜ ಮಧ್ಯವರ್ತಿಗಳು ಸೇರಿದಂತೆ ರೈತ ಸಮುದಾಯ ಮತ್ತು ಇತರ ಪಾಲುದಾರರೊಂದಿಗೆ ನಿಕಟವಾಗಿ ಕೆಲಸ ಮಾಡುವುದರಿಂದ ಇದು ಸಾಧ್ಯವಾಗಿದೆ.

ಕಳೆದ 27 ವರ್ಷಗಳಲ್ಲಿ, 10,000 / 34/38 ವರ್ಷಗಳಲ್ಲಿ ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ವಿಶ್ವವಿದ್ಯಾಲಯದಿಂದ , ಸ್ನಾತಕ , ಸ್ನಾತಕೋತ್ತರ ಮತ್ತು ಡಾಕ್ಟರೇಟ್ ಪದವಿಗಳನ್ನು ಪಡೆದು ಪದವೀಧರರಾಗಿದ್ದಾರೆ. ವಿಶ್ವವಿದ್ಯಾಲಯವು 175 ಕ್ಕೂ ಹೆಚ್ಚು ಸುಧಾರಿತ ಬೆಳೆ ಪ್ರಭೇದಗಳನ್ನು ಮತ್ತು ಸುಮಾರು 600 ಇತರ ತಂತ್ರಜ್ಞಾನಗಳನ್ನು ಬಿಡುಗಡೆ ಮಾಡಿದ್ದು ಇದು ರಾಜ್ಯ ಮತ್ತು ದೇಶದಾದ್ಯಂತ ಮಾತ್ರವಲ್ಲದೆ ಇಂಡೋನೇಷ್ಯಾದಂತಹ ಇತರ ದೇಶಗಳಲ್ಲಿಯೂ ಕೃಷಿ ಸಮುದಾಯಕ್ಕೆ ಪ್ರಯೋಜನವನ್ನು ನೀಡಿದೆ. ಕೃಷಿ ವಿಜ್ಞಾನ ಕೇಂದ್ರಗಳು ಮತ್ತು ವಿಸ್ತರಣಾ ಶಿಕ್ಷಣ ಘಟಕಗಳಂತಹ ನಮ್ಮ ವ್ಯಾಪ್ತಿಯ ವಿಭಾಗಗಳು ರೈತರಿಗೆ ಮತ್ತು ಇದೇ ಕಾರ್ಯಕ್ಷೇತ್ರವುಳ್ಳ ಇಲಾಖೆಗಳ ಅಧಿಕಾರಿಗಳಿಗೆ ವಿವಿಧ ತರಬೇತಿ ಚಟುವಟಿಕೆಗಳನ್ನು ಒದಗಿಸುವ ಮೂಲಕ ಉಪಯುಕ್ತ ತಂತ್ರಜ್ಞಾನಗಳು ಮತ್ತು ಸೇವೆಗಳನ್ನು ಒದಗಿಸುತ್ತವೆ.

ವಿಶ್ವವಿದ್ಯಾಲಯವು ಹಲವಾರು ಪ್ರತಿಷ್ಠಿತ ಪ್ರಶಸ್ತಿಗಳನ್ನು ಗೆದ್ದಿದೆ ಅವುಗಳೆಂದರೆ; ರಾಷ್ಟ್ರೀಯ ಉತ್ಪಾದಕತೆ ಪ್ರಶಸ್ತಿ (1986-87); ಸರ್ದಾರ್ ಪಟೇಲ್ ಅತ್ಯುತ್ತಮ ಸಂಸ್ಥೆ ಪ್ರಶಸ್ತಿ (2000); ಇಂದಿರಾ ಗಾಂಧಿ ರಾಷ್ಟ್ರೀಯ ರಾ.ಸೇ.ಯೋ. ಪ್ರಶಸ್ತಿ (2001), ಸಿಜಿಐಆರ್ ಕಿಂಗ್ ಬೌಡೌಯಿನ್ ಪ್ರಶಸ್ತಿ (2002) ಮತ್ತು ಕಡಲೆ ಸುಧಾರಣೆಗಾಗಿ ಇಕ್ರಿಸ್ಯಾಟ್ ನ ಡೋರೀನ್ ಮಶ್ಲರ್ ಪ್ರಶಸ್ತಿ (2002); ಐಸಿಎಆರ್ ನ ಅಖಿಲ ಭಾರತ ಹೆಚ್ಚಿನ ಸಂಖ್ಯೆಯ ಜೂನಿಯರ್ ರಿಸರ್ಚ್ ಫೆಲೋಶಿಪ್ಗಳು (2005-06, 2006-07, 2007-08 ಮತ್ತು 2009-10); ಇಕ್ರಿಸ್ಯಾಟ್ ಸಂಶೋಧನಾ ಪಾಲುದಾರಿಕೆ ಪ್ರಶಸ್ತಿ (2010); ಮಹೀಂದ್ರ ಸಮೃದ್ಧಿ ಕೃಷಿ ಶಿಕ್ಷಾ ಸಮ್ಮಾನ್ ಪ್ರಶಸ್ತಿ (2013)ಮತ್ತು ಅತ್ಯುತ್ತಮ ಡಾಕ್ಟರೇಟ್ ಸಂಶೋಧನೆಗಾಗಿ ಜವಾಹರಲಾಲ್ ನೆಹರು ಪ್ರಶಸ್ತಿಗಳು (14). ಇದು ಹೆಚ್ಚಿನ ಶೈಕ್ಷಣಿಕ ಉತ್ಕೃಷ್ಟತೆಗಾಗಿ ಹನ್ನೆರಡು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಶೈಕ್ಷಣಿಕ ಸಹಯೋಗಗಳನ್ನು ಸ್ಥಾಪಿಸಿದೆ.

ವಿಶ್ವವಿದ್ಯಾಲಯವು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ರಂಗದಲ್ಲಿ ತನ್ನದೇ ಆದ ಗಣ್ಯಸ್ಥಾನವನ್ನು ರೂಪಿಸಿಕೊಂಡಿದೆ. ಭಾರತ ಮತ್ತು ವಿದೇಶಗಳಲ್ಲಿನ ಕೃಷಿ ವಿಶ್ವವಿದ್ಯಾಲಯಗಳಲ್ಲಿ ಉನ್ನತ ಶೈಕ್ಷಣಿಕ ಗುಣಮಟ್ಟ, ಸಂಶೋಧನಾ ಸಾಧನೆಗಳು ಮತ್ತು ತಂತ್ರಜ್ಞಾನದ ಪರಿಣಾಮಕಾರಿ ವರ್ಗಾವಣೆಯಿಂದಾಗಿ ನಮ್ಮ ವಿಶ್ವವಿದ್ಯಾಲಯವು ಹೆಸರುವಾಸಿಯಾಗಿದೆ. ಈ ಮಹಾನ್ ಸಂಸ್ಥೆಗೆ ದೃಢವಾದ ಅಡಿಪಾಯವನ್ನು ಹಾಕುವಲ್ಲಿ ಮತ್ತು ದಶಕಗಳಲ್ಲಿ ಅದರ ಪ್ರಗತಿಯನ್ನು ಸುಗಮಗೊಳಿಸುವಲ್ಲಿ ಶ್ರಮಿಸಿದ ನನಗಿಂತ ಮುಂಚಿನವರನ್ನು ನಾನು ನನ್ನ ಕೃತಜ್ಞತೆಯನ್ನು ದಾಖಲಿಸುತ್ತೇನೆ.

ವಿಶ್ವವಿದ್ಯಾಲಯವು ಪ್ರಾರಂಭದಿಂದಲೂ ಅದ್ಭುತ ಯಶಸ್ಸನ್ನು ಸಾಧಿಸಿದೆ. ಅದೇ ಸಮಯದಲ್ಲಿ, ಆತ್ಮತೃಪ್ತಿ ಪಡುವ ಅಗತ್ಯವಿಲ್ಲ ಎಂದು ನಾನು ನಂಬುತ್ತೇನೆ. ಸ್ಥಳೀಯ ಮತ್ತು ಜಾಗತಿಕ ಬದಲಾವಣೆಗಳೊಂದಿಗೆ ಹೊರಹೊಮ್ಮುತ್ತಿರುವ ರೈತ ಸಮುದಾಯದ ಹೊಸ ಸವಾಲುಗಳು ಮತ್ತು ಬೇಡಿಕೆಗಳ ಬಗ್ಗೆ ನಾವು ಗಮನಹರಿಸಬೇಕಾಗಿದೆ. ಕೃಷಿ ಉತ್ಪಾದಕತೆಯನ್ನು ಹೆಚ್ಚಿಸುವುದು, ರೈತರ ಆದಾಯವನ್ನು ಹೆಚ್ಚಿಸುವುದು ಮತ್ತು ಕೃಷಿ ವ್ಯಾಪಾರವನ್ನು ವಿಸ್ತರಿಸುವುದು ಒತ್ತು ನೀಡುವ ಸಂಗತಿಗಳಾಗಿವೆ. ನೈಸರ್ಗಿಕ ಸಂಪನ್ಮೂಲಗಳನ್ನು ಸಂರಕ್ಷಿಸುವ ಮತ್ತು ಆರೋಗ್ಯಕರ ಜೀವನೋಪಾಯವನ್ನು ಒದಗಿಸುವ ಅಗತ್ಯವನ್ನೂ ಕೂಡ ನಾವು ನೆನಪಿನಲ್ಲಿಟ್ಟುಕೊಳ್ಳಬೇಕು. ಸಮಾಜವು ಈ ವಿಶ್ವವಿದ್ಯಾಲಯದಿಂದ ಬಹಳಷ್ಟು ಬೇಡಿಕೆಗಳನ್ನು ಹೊಂದಿದೆ ಮತ್ತು “ನನ್ನ ತಂಡ – ಕೃವಿವಿಧಾ”- ಅಧಿಕಾರಿಗಳು, ಶಿಕ್ಷಣ ತಜ್ಞರು, ಶಿಕ್ಷಕರು, ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಮುಂಬರುವ ದಶಕಗಳಲ್ಲಿ ರೈತ ಸಮುದಾಯವನ್ನು ಎದುರಿಸುವ ಸವಾಲುಗಳನ್ನು ಎದುರಿಸಲು ಸಜ್ಜಾಗುತ್ತಾರೆ ಎಂದು ನಾನು ಭಾವಿಸುತ್ತೇನೆ.

ನಾನು ಈ ವಿಶ್ವವಿದ್ಯಾಲಯವನ್ನು ನೈಜ “ರೈತರ ವಿಶ್ವವಿದ್ಯಾಲಯ” ಎಂದು ಕರೆಯುತ್ತೇನೆ, ಏಕೆಂದರೆ ಇದು ರೈತರಿಂದ ಮತ್ತು ರೈತರಿಗಾಗಿ. ಇರುವ ರೈತರ ವಿಶ್ವವಿದ್ಯಾಲಯ. ನಮ್ಮ ಅನ್ನದಾತರ (ಅನ್ನ ನೀಡುವವರ) ಕನಸುಗಳನ್ನು ಈಡೇರಿಸುವಲ್ಲಿ ಸಮರ್ಪಿತ ಮತ್ತು ಸಂಘಟಿತ ಪ್ರಯತ್ನಗಳ ಮೂಲಕ ನಾವು ನಮ್ಮ ಪ್ರತಿಜ್ಞೆಯನ್ನು ಈಡೇರಿಸಿಕೊಳ್ಳುತ್ತೇವೆ.

ಡಾ.ಪಿ.ಎಲ್.ಪಾಟೀಲ

Mega Exhibition of National Agri-Startup Expo

Scroll to Top