ಕೃಷಿ ವಿಶ್ವವಿದ್ಯಾಲಯ, ಧಾರವಾಡದ ವಿಸ್ತರಣಾ ನಿರ್ದೇಶನಾಲಯದಲ್ಲಿ ಇಬ್ಬರು ವಿಸ್ತರಣಾ ಸಹನಿರ್ದೇಶಕರು, ಒಬ್ಬರು ಧಾರವಾಡ ಕೇಂದ್ರ ಸ್ಥಾನದಲ್ಲಿ, ಇನ್ನೊಬ್ಬರು ವಿಜಯಪುರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಸಹವಿಸ್ತರಣಾ ನಿರ್ದೇಶಕರು (ಕೇಂದ್ರ ಸ್ಥಾನÀ ಧಾರವಾಡ) ಇವರ ವ್ಯಾಪ್ತಿಯಲ್ಲಿ ಬರುವ ನಾಲ್ಕು ಜಿಲ್ಲೆಗಳಲ್ಲಿ (ಬೆಳಗಾವಿ, ಧಾರವಾಡ,ಉತ್ತರ ಕನ್ನಡ ಮತ್ತು ಹಾವೇರಿ)ಮೂರು ಕೃಷಿ ವಿಜ್ಞಾನ ಕೇಂದ್ರಗಳು (ಧಾರವಾಡ, ಹನುಮನಮಟ್ಟಿ ಮತ್ತು ಉತ್ತರ ಕನ್ನಡ (ಸಿರ್ಸಿ)) ಮತ್ತು ಮೂರು ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರಗಳು (ಕುಮಟಾ, ಬೆಳವಟಗಿ ಮತ್ತು ಸಂಕೇಶ್ವರ)ಕಾರ್ಯನಿರ್ವಹಿಸುತ್ತಿವೆ. ವಿಸ್ತರಣಾ ಸಹನಿರ್ದೇಶಕರು, ವಿಜಯಪುರ ಇವರ ವ್ಯಾಪ್ತಿಯಲ್ಲಿ ಬರುವ ಮೂರು ಜಿಲ್ಲೆಗಳಲ್ಲಿ (ಗದಗ, ಬಾಗಲಕೋಟೆ ಮತ್ತು ವಿಜಯಪುರ) ಮೂರು ಕೃಷಿ ವಿಜ್ಞಾನ ಕೇಂದ್ರಗಳು (ವಿಜಯಪುರ-I, ವಿಜಯಪುರ-II ಮತ್ತು ಬಾಗಲಕೋಟೆ) ಮತ್ತು ಎರಡು ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರಗಳು (ಮುಧೋಳ ಮತ್ತು ವಿಜಯಪುರ) ಇರುತ್ತವೆ.
ಇಬ್ಬರು ವಿಸ್ತರಣಾ ಸಹನಿರ್ದೇಶಕರು ತಮ್ಮ ಜಿಲ್ಲೆಯ ಕೃಷಿ ಇಲಾಖೆಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಇಲಾಖೆಯ ವಿವಿಧ ಹಂತದ ಅಧಿಕಾರಿಗಳಿಗೆ ಕೃಷಿ ಸಲಹೆಗಳನ್ನು ನೀಡುತ್ತಿದ್ದಾರೆ ಮತ್ತು ಕ್ಷೇತ್ರದ ಸಮಸ್ಯೆಗಳಿಗೆ ಪರಿಹಾರವನ್ನು ಸೂಚಿಸುತ್ತಾರೆ. ಪ್ರತಿ ಎರಡು ತಿಂಗಳಿಗೊಮ್ಮೆ ಆಯಾ ಜಿಲ್ಲೆಯ ಜಂಟಿ ಕೃಷಿ ನಿರ್ದೇಶಕರೊಂದಿಗೆ ಎರಡು ತಿಂಗಳಿಗೊಮ್ಮೆ ದ್ವೈಮಾಸಿಕ ಕಾರ್ಯಾಗಾರಗಳನ್ನು ಏರ್ಪಡಿಸಿ, ಕ್ಷೇತ್ರದ ಪರಿಸ್ಥಿತಿ, ಕ್ಷೇತ್ರದ ಸಮಸ್ಯೆಗಳ ಕುರಿತು ಪ್ರತಿಕ್ರಿಯೆ ಪಡೆಯಲು ಮತ್ತು ಜಿಲ್ಲೆಯ ಎಲ್ಲಾ ತಾಲ್ಲೂಕುಗಳ ಕೃಷಿ ಅಧಿಕಾರಿಗಳಿಗೆ ವಿಶ್ವವಿದ್ಯಾಲಯದ ವಿಜ್ಞಾನಿಗಳತಂಡದ ಸಹಾಯದಿಂದ ಪರಿಹಾರವನ್ನು ಒದಗಿಸಲಾಗುತ್ತದೆ. ಮತ್ತು ಸುಸ್ಥಿರ ಆಧಾರದ ಮೇಲೆ ಹೆಚ್ಚಿನ ಉತ್ಪಾದಕತೆಯನ್ನು ಸಾಧಿಸಲು ಮುಂದಿನ ಎರಡು ತಿಂಗಳಲ್ಲಿ ಕೈಗೊಳ್ಳಬೇಕಾದ ಆಧುನಿಕ ಕೃಷಿ ತಂತ್ರಜ್ಞಾನಗಳ ಬಗ್ಗೆ ಶಿಕ್ಷಣ ನೀಡುತ್ತಾರೆ.